top of page

ಋತುಚಕ್ರದ ಆರೋಗ್ಯ ಸಲಹೆ ಕಾರ್ಯಕ್ರಮ

  • Writer: newsnowvijayanagar
    newsnowvijayanagar
  • Feb 4
  • 1 min read

ವಿಜಯನಗರ (ಹೊಸಪೇಟೆ) ಫೇಬ್ರುವರಿ 3 ರಂದು ಹನುಮನಹಳ್ಳಿ ಮತ್ತು ಡಣಾಪುರ 114 ಗ್ರಾಮದ ಸರ್ಕಾರಿ ಶಾಲೆ ಸಭಾಂಗಣದಲ್ಲಿ ಓಂ ಶ್ರೀ ಸಿಂಧು ಸೃಷ್ಟಿ ಸೇವಾ ಟ್ರಸ್ಟ್(ರಿ) ಹಾಗೂ ಶ್ರೀ ಸಿದ್ಧರಾಮೇಶ್ವರ ಕಲಾ ಸಾಂಸ್ಕೃತಿಕ ಸಂಘ(ರಿ) ಹಂಪಿ ಇವರ ವತಿಯಿಂದ ಹೆಣ್ಣು ಮಕ್ಕಳಿಗೆ ಬಟ್ಟೆ ಮತ್ತು ಬಾಳೆ ನಾರಿನಿಂದ ಮಾಡಿದ ಪ್ಯಾಡ್ ಗಳ ಕುರಿತು ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.


ಕಾರ್ಯಕ್ರಮವನ್ನು ಉದ್ದೇಶಿಸಿ ಭಾಗ್ಯ ಅವರು ಮಾತನಾಡಿ ಹಂಪಿಯಿಂದ ಹನುಮನಹಳ್ಳಿ ಶಾಲೆಗೆ ಆಗಮಿಸಿ ಮಕ್ಕಳಿಗೆ ಋತುಚಕ್ರ ಆದ ಸಂದರ್ಭದಲ್ಲಿ ಹೇಗೆ ಆರೋಗ್ಯ ಕಾಪಾಡಿಕೊಳ್ಳಬೇಕು ಮತ್ತು ಬಟ್ಟೆಯಿಂದ ತಯಾರಿಸಿದ ಪ್ಯಾಡ್ ಹೇಗೆ ಉಪಯೋಗಿಸ ಬಹುದು ಶುಚಿತ್ವ ಮಾಡಿ ಬಿಸಿಲಿನಲ್ಲಿ ಒಣಗಿಸಿ ಮರುಬಳಕೆ ಮಾಡಬಹುದು. ನೈರ್ಮಲ್ಯದಿಂದ ಪರಿಸರದಲ್ಲಿ ಉಪಯೋಗಿಸ ಬಹುದಾದ ಪ್ಯಾಡ್ ಬಗ್ಗೆ ಮಾಹಿತಿ ನೀಡಿದರು ಹಾಗೂ ಪ್ರಾಕೃತಿಕವಾಗಿ ದೊರೆಯುವ ಬಾಳೆದಿಂಡಿನಿಂದ ಹಲವಾರು ವಸ್ತುಗಳನ್ನು ಮಾಡಬಹುದು ಎಂದು ಮಕ್ಕಳಿಗೆ ತಿಳಿಯಪಡಿಸಿದರು.


ree

ಈ ಕಾರ್ಯಕ್ರಮಕ್ಕೆ ಓಂ ಶ್ರೀ ಸಿಂಧು ಸೃಷ್ಟಿ ಸೇವಾ ಟ್ರಸ್ಟ್ ಅಧ್ಯಕ್ಷರಾದ ಪಿ.ಸಿ.ಶಾಂತ ಶ್ರೀ ಸಿದ್ಧರಾಮೇಶ್ವರ ಕಲಾ ಸಾಂಸ್ಕೃತಿಕ ಸಂಘದ ಸಂಪನ್ಮೂಲ ವ್ಯಕ್ತಿಯಾದ ವಿ ಭಾಗ್ಯ ಲಕ್ಷ್ಮಿ ಮತ್ತು ಕವಿತಾ ಪರಮೇಶ್ವರ್ ಹಾಗೂ ಡಣಾಪುರ, ಹನುಮನಹಳ್ಳಿಯ ಶಿಕ್ಷಕಿಯರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು

Recent Posts

See All
ಜೆಸ್ಕಾಂ ಗ್ರಾಹಕರ ಸಂವಾದ ಸಭೆ

ವಿಜಯನಗರ(ಹೊಸಪೇಟೆ)ಮೇ: ಹೊಸಪೇಟೆ ನಗರ ಉಪವಿಭಾಗ -1 ರ ಡ್ಯಾಂ ರಸ್ತೆಯ ಜೆಸ್ಕಾಂ ಕಚೇರಿಯಲ್ಲಿ ಮೇ.17 ರಂದು ಮಧ್ಯಾಹ್ನ 12 ಗಂಟೆಯಿಂದ 1 ಗಂಟೆಯವರೆಗೆ ಗ್ರಾಹಕರ ಕುಂದು...

 
 
 

Comments


bottom of page