top of page

*ಕರ್ನಾಟಕ ಮಾಹಿತಿ ಆಯೋಗದ ಮುಖ್ಯ ಆಯುಕ್ತರಾಗಿ ಎ.ಎಂ .ಪ್ರಸಾದ್ ಆಯ್ಕೆ*

  • Writer: newsnowvijayanagar
    newsnowvijayanagar
  • Feb 1
  • 1 min read

ಬೆಂಗಳೂರು: ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ಮುಖ್ಯ ಆಯುಕ್ತರ ನೇಮಕಕ್ಕೆ ರಾಜ್ಯ ಸರ್ಕಾರ ಕಳಿಸಿದ್ದ ಪ್ರಸ್ತಾವನೆಗೆ ರಾಜ್ಯಪಾಲರು ಗುರುವಾರ ಅಂಕಿತ ಹಾಕಿದ್ದಾರೆ .ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ಮುಖ್ಯ ಆಯುಕ್ತರಾಗಿ ನಿವೃತ್ತ ಐಪಿಎಸ್ ಅಧಿಕಾರಿಗಳಾದ ಎ.ಎಂ .ಪ್ರಸಾದ್ ಆಯ್ಕೆಯಾಗಿದ್ದಾರೆ

ಅದೇ ರೀತಿಯಾಗಿ ಮಾಹಿತಿ ಆಯುಕ್ತರಾಗಿ ರುದ್ರಣ್ಣ ಹರ್ತಿಕೋಟೆ, ಕೆ ರಾಮನ್, ಹರೀಶ್ ಕುಮಾರ್, ನಾರಾಯಣ ಚನ್ನಾಳ, ಎಸ್ ರಾಜಶೇಖರ್,ಕೆ ಭದ್ದುದ್ರದ್ದೀನ್ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಬಿ ಆರ್ ಮಮತಾ ಮಾಹಿತಿ ಆಯುಕ್ತರಾಗಿ ಆಯ್ಕೆಯಾಗಿದ್ದು, ಅವರು ಮುಂದಿನ ಮೂರು ವರ್ಷಗಳ ಕಾಲ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ.

Comments


bottom of page