top of page

ಅನುವಾದ ಕ್ರಿಯಾಶೀಲತೆಯನ್ನು ಬೇಡುವ ಕೆಲಸ : ಡಾ.ವೆಂಕಟಗಿರಿ ದಳವಾಯಿ

  • Writer: newsnowvijayanagar
    newsnowvijayanagar
  • 3 hours ago
  • 1 min read


ಅನುವಾದದ ಹೆಜ್ಜೆ ಗುರುತುಗಳು ಪುಸ್ತಕವು ಸಮಕಾಲೀನತೆ, ಒತ್ತಾಸೆ ಮತ್ತು ಒಳನೋಟಗಳನ್ನು ಕಟ್ಟಿಕೊಡುತ್ತದೆ. ಈ ಕೃತಿ ಓದುಗರು ಮತ್ತು ಓದಿನ ನಡುವಿನ ಸೂಕ್ಷ್ಮತೆಗಳಿಗೆ ಮತ್ತು ಕನ್ನಡ, ತುಳು, ಮಲೆಯಾಳಂ ಅನುವಾದದ ಬಗೆಗಿನ ಪ್ರೀತಿ ಹಾಗೂ ನಿಷ್ಟುರತೆಗೆ ಧ್ವನಿಯಾಗಿದೆ. ಎಂದು ಕನ್ನಡ ವಿಶ್ವವಿದ್ಯಾಲಯದ ಸಾಹಿತ್ಯ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ.ವೆಂಕಟಗಿರಿ ದಳವಾಯಿ ಅವರು ಅಭಿಪ್ರಾಯಪಟ್ಟರು.

ಕನ್ನಡ ವಿಶ್ವವಿದ್ಯಾಲಯದ ಭಾಷಾಂತರ ಅಧ್ಯಯನ ವಿಭಾಗದ ವಿದ್ಯಾರ್ಥಿಗಳು ಮತ್ತು ಹಳೆಯ ವಿದ್ಯಾರ್ಥಿಗಳ ವತಿಯಿಂದ ದಿನಾಂಕ ೩೦ನೇ ಮೇ ೨೦೨೫ರಂದು ಮಂಟಪ ಸಭಾಂಗಣದಲ್ಲಿ ಪ್ರೊ. ಮೋಹನ ಕುಂಟಾರ್ ದತ್ತಿನಿಧಿ ಉದ್ಘಾಟನೆ, ಪುಸ್ತಕ ಬಿಡುಗಡೆ ಮತ್ತು ಅಭಿನಂದನಾ ಸಮಾರಂಭವನ್ನು ಉದೇಶಿಸಿ ಅವರು ಮಾತನಾಡಿದರು.

ಮುಂದುವರೆದು ಮಾತನಾಡುತ್ತ ಅನುವಾದ ಸಾಹಿತ್ಯ ವಲಯದಲ್ಲಿ ಪ್ರೊ.ಮೋಹನ ಕುಂಟಾರ್ ಅವರು ಪ್ರಮುಖರಾಗಿ ಗುರುತಿಸಕೊಳ್ಳುತ್ತಾರೆ. ಬಸೀರ್ ಅವರ ಕೃತಿಗಳ ಭಾಷಾಂತರಿಂದ ಇಲ್ಲಿಯವರೆಗೂ ಅನುವಾದ ಕ್ಷೇತ್ರದಲ್ಲಿ ಅಪಾರವಾದ ಕೆಲಸ ಮಾಡಿರುವರು. ಅನುವಾದವು ಒಂದು ರೀತಿಯ ಕ್ರಿಯಾಶೀಲತೆಯನ್ನು ಬೇಡುವ ಕೆಲಸ. ಯಾವುದೇ ಭಾಷೆಯ ಅನುವಾದ ನೆಲೆಯೊಳಗೆ ನಾವು ಕ್ರಿಯಾಶೀಲತೆಯನ್ನು ಸ್ವೀಕರಿಸದ್ದೇವೆ ಆದರೆ ಅದನ್ನು ದಾಖಲಿಸಿಲ್ಲ ಅಷ್ಟೇ. ಸಾಂಸ್ಕೃತಿಕ ವಲಯದಲ್ಲಿ ಅನುವಾದಗಳನ್ನು ಚರ್ಚಿಸಬೇಕು. ಬಲಿಷ್ಟವಾದ ಸಮುದಾಯಗಳಿಗೆ ಅನುವಾದದ ಅಗತ್ಯವಿಲ್ಲದಿರಬಹುದು ಆದರೆ ಹೊಸತನ್ನು ಬಯಸುವ, ಸ್ವೀಕರಿಸುವ ತಳ ಸಮುದಾಯಗಳಿಗೆ ಅನುವಾದದ ಅಗತ್ಯವಿದೆ ಎಂದರು.

ಕನ್ನಡ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಡಾ.ಡಿ.ವಿ.ಪರಮಶಿವಮೂರ್ತಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತ, ಭಾಷಾಂತರ ಒಂದು ಸೃಜನಶೀಲ ಕಲೆ. ಇಂದು ಭಾಷಾಂತರ ವಲಯ ವಿಸ್ತಾರಗೊಂಡಿದೆ. ಸ್ವಾತಂತ್ರö್ಯ ಪೂರ್ವ ಭಾಷಾಂತರ ಮತ್ತು ಸ್ವಾತಂತ್ರ್ಯ ನಂತರದ ಕಾಲಘಟ್ಟದಲ್ಲಿನ ಭಾಷಾಂತರಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಪ್ರೊ.ಮೋಹನ ಕುಂಟಾರ್ ಅವರು ಭಾಷಾಂತರಕ್ಕೆ ವಿದ್ವತ್ ವಲಯದಲ್ಲಿ ಸ್ಥಾನ ಕಲ್ಪಿಸಿಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ ಎಂದರು.

ಕನ್ನಡ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ವಿಜಯ್ ಪೂಣಚ್ಚ ತಂಬಂಡ ಅವರು ಮಾತನಾಡುತ್ತ, ಪ್ರೊ.ಮೋಹನ ಕುಂಟಾರ್ ಅವರು ಸರಳ ಸಜ್ಜನಿಕೆ ಮತ್ತು ಶಿಸ್ತಿಗೆ ಹೆಸರುವಾಸಿಯಾದ ವ್ಯಕ್ತಿ. ಇವರು ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ, ವಿವಿಧ ಅಧ್ಯಯನ ಕೇಂದ್ರಗಳ ನಿರ್ದೇಶಕರಾಗಿ, ಡೀನರಾಗಿ ಅತ್ಯುತ್ತಮ ಕಾರ್ಯನಿರ್ವಹಿಸಿದ್ದಾರೆ ಎಂದರು.

ದ್ರಾವಿಡ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಸಿ. ವೆಂಕಟೇಶ್ ಅವರು ಮಾತನಾಡುತ್ತ, ಪ್ರೊ.ಮೋಹನ ಕುಂಟಾರ್ ಅವರದು ಬಹುಮುಖ ವ್ಯಕ್ತಿತ್ವ. ಸಾಹಿತ್ಯ, ಅನುವಾದ, ಯಕ್ಷಗಾನ ಹೀಗೆ ಹಲವು ವಲಯಗಳಲ್ಲಿ ತಮ್ಮನ್ನು ತೊಡಗಿಸಿ ಕೊಂಡಿದ್ದಾರೆ. ಕನ್ನಡ ಮತ್ತು ಮಲೆಯಾಳಂ ಅನುವಾದ ಸಾಹಿತ್ಯದ ಕೊಂಡಿಯಾಗಿ ಅವರು ಕಾರ್ಯನಿರ್ವಹಿಸಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಯಾಜಿ ಪ್ರಕಾಶನವು ಪ್ರಕಟಿಸಿದ್ದ ಅನುವಾದದ ಹೆಜ್ಜೆಗುರುತುಗಳು ಪುಸ್ತಕವನ್ನು ಬಿಡುಗಡೆ ಗೊಳಿಸಲಾಯಿತು ಮತ್ತು ಪ್ರೊ.ಮೋಹನ ಕುಂಟಾರ್ ದತ್ತಿನಿಧಿಯನ್ನು ಉದ್ಘಾಟಿಸಲಾಯಿತು. ಈ ಕಾರ್ಯಕ್ರಮದಲ್ಲಿ ಪ್ರೊ.ಮೋಹನ ಕುಂಟಾರ್ ದತ್ತಿನಿಧಿ ಸ್ಥಾಪಕರಾದ ಡಾ.ಸೌಮ್ಯಲತಾ ಪಿ., ಧಾರವಾಡದ ವಿಶ್ವನಾಥ ನಾಗರಣ, ವಿವಿಧ ವಿಭಾಗಗಳ ಮುಖ್ಯಸ್ಥರು, ನಿಕಾಯಗಳ ಡೀನರು, ಸಂಶೋಧನಾರ್ಥಿಗಳು ಉಪಸ್ಥಿತರಿದ್ದರು.

Recent Posts

See All

Commentaires


bottom of page